ಸಂಚಲನ

ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ
ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ?
ಈ ಗಿಡಗಳು ಬಾಡಿ ಬರಲಾಗಿವೆ
ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ
ಸಫಲವಾಗುವುದು ಹೇಗೆ?

ಮಾನವರ ನಡುವೆ ಗೋಡೆ ಗೋಡೆಗಳು
ಸಂದುಗೊಂದುಗಳಲ್ಲೇ ನೋಟಗಳು
ಇವನೆಲ್ಲ ಕೆಡವಿ ಎಲ್ಲರೂ ಒಂದೇ
ಆಕಾಶ ನೋಡುತ್ತ ಬಯಲಲ್ಲಿ ಹಾಡುತ್ತ
ಕುಣಿಯುವಂತೆ ಮಾಡುವುದು ಹೇಗೆ?

ಈ ಬಂಡಿ ಮುಂದೆ ಹೋಗಲೇ ಒಲ್ಲದು
ಎತ್ತುಗಳು ನೆಲಕಚ್ಚಿ ಬಿದ್ದಿದೆ
ಇವುಗಳ ಬಾಲ ತಿರುವಿ ಮೇಲಕ್ಕೆಬ್ಬಿಸಿ
ಬಂಡಿ ಮುಂದೆ ಹೋಗಲು
ಎಳೆಯುವಂತೆ ಮಾಡುವುದು ಹೇಗೆ?

ಈ ಕಣ್ಣುಗಳು ಮತ ಧರ್ಮಗಳ
ಬಣ್ಣ ಗಾಜುಗಳಿಂದ ಅಲಂಕೃತವಾಗಿವೆ
ನೋಡಿದ್ದೆಲ್ಲ ಬಣ್ಣ ಬಣ್ಣ
ಗಾಜುಗಳ ಒಡೆದು ವರ್ಣರಹಿತವಾದ
ನಿಜ ಮಾನವನ ಎದೆಯಾಗಸವ
ನೋಡುವಂತೆ ಮಾಡುವುದು ಹೇಗೆ?

ಈ ಬಳ್ಳಿಗಳು ಅಲ್ಲಲ್ಲಿಗೆ ಅಲ್ಲಲ್ಲಿಗೆ
ಮುರುಟಿಕೊಂಡು ಸಂದುಗೊಂದುಗಳಲ್ಲಿ
ತೂರಿಕೊಳ್ಳುತ್ತಿವೆ ಕತ್ತಲಲ್ಲೇ ಸುತ್ತುತ್ತಿವೆ
ಇವು ಗಾಳಿ ಬೆಳಕುಗಳಿಗೆ
ಚಾಚಿಕೊಂಡು ಅಗಲ ಉದ್ದವಾಗಿ
ಹಬ್ಬುವಂತೆ ಮಾಡುವುದು ಹೇಗೆ?

ಈ ಹುಳುಗಳು ತಮ್ಮ ಸುತ್ತಲೇ ಸುತ್ತುತ್ತ
ತಮ್ಮ ಬಾಲಗಳ ತಾವೇ ನುಂಗುತ್ತ
ಒದ್ದಾಡುವುದ ಬಿಡಿಸಿ
ಮೈಸೆಟಸಿ ನೆಟ್ಟಗೆ ಮುಂದಕ್ಕೆ
ಸಾಗುವಂತೆ ಮಾಡುವುದು ಹೇಗೆ?

ಬಕಪಕ್ಷಿಗಳು ತೇಲುಗಣ್ಣು ಮಾಡಿಕೊಂಡು
ಗದ್ದುಗೆಯೇರಿ ಕುಳಿತುಕೊಂಡು
ಮೇಲುಮೇಲಕ್ಕೆ ಕೈ ಮಾಡಿ ಗುಂಡಿಗಳಲ್ಲಿ
ಎಲ್ಲ ಮೀನುಗಳ ಬಳಿಗೆ ಸೇರಿಸಿಕೊಂಡು
ತೇಲಾಡುವಂತೆ ಮಾಡುತ್ತಿವೆ
ಅವುಗಳನ್ನು ಬಿಡಿಸಿ ಹಾಯಾಗಿ
ಸಾಗರದಪಾರ ತಿಳಿ ಜಲದ ಮೇಲೆ
ಲೀಲಾಜಾಲವಾಗಿ ಈಜಾಡುವಂತೆ
ಮಾಡುವುದು ಹೇಗೆ?

ಕಟ್ಟಿದ ಸಂಕೋಲೆಗಳಿಂದ
ಕೆಸರೂಳಗೆ ಕಾಲುಗಳ ಕೀಳಲಾರದೆ
ಕೀಳಲು ಸೆಣಸಾಡುತ್ತ ಎಳೆದಾಡುವ
ಈ ಪ್ರಾಣಿಗಳ ಬೇಡಿಗಳ ಬಿಡಿಸಿ
ಗಟ್ಟಿ ನೆಲದ ಮೇಲೆ
ಓಡಾಡುವಂತೆ ಮಾಡುವುದು ಹೇಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಂಚ
Next post ವೈದೇಹಿ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys